Bhagavad Gita: ನಮ್ಮ ಜೀವನದಲ್ಲಿ ನಾವು ಅಂದುಕೊಂಡಂತೆ ವಿಷಯಗಳು ನಡೆಯದೆ ಇದ್ದಾಗ ನಾವು ಏಕೆ ನೋವು ಅನುಭವಿಸುತ್ತೇವೆ, ಇದಕ್ಕೆ ಭಗವದ್ಗೀತೆ ಒಂದು ಶಾಶ್ವತ ಉತ್ತರವನ್ನು ನೀಡುತ್ತದೆ. ಮಾನವನ ದುಃಖಕ್ಕೆ ಮೂಲ ಕಾರಣ ನಿಯಂತ್ರಣವಿಲ್ಲದ ಆಸೆ ಮತ್ತು ಭಾಂದವ್ಯ ಎಂದು ಶ್ರೀ ಕೃಷ್ಣ ಹೇಳುತ್ತಾನೆ.
ನಮ್ಮ ನಿರೀಕ್ಷೆಗಳು ನಮ್ಮನ್ನು ಆಳಿದಾಗ ನಿರಾಸೆ ಅನಿವಾರ್ಯವಾಗುತ್ತದೆ ಆದರೆ ಗೀತೆಯೂ ನಮ್ಮನ್ನು ಜೀವನದಿಂದ ದೂರವಿರುವಂತೆ ಹೇಳುವುದಿಲ್ಲ ಬದಲಾಗಿ ಇದು ಒಂದು ಸಮತೋಲನದ ಮಾರ್ಗವನ್ನು ತೋರಿಸುತ್ತದೆ. ಅಂಟಿಕೊಳ್ಳದೆ ಪ್ರೀತಿಸುವುದು, ಫಲದ ಬಗ್ಗೆ ತಲೆಕೆಡಿಸಿಕೊಳ್ಳದೆ ಕರ್ತವ್ಯ ಮಾಡುವುದು ಮತ್ತು ನಷ್ಟದ ಭಯವಿಲ್ಲದೆ ಬದುಕುವುದು ನಮಗೆ ಶಾಶ್ವತವಾದ ಸಂತೋಷ ಮತ್ತು ಆಂತರಿಕ ಶಕ್ತಿಯನ್ನು ನೀಡುತ್ತದೆ.
ಇದನ್ನೂ ಓದಿ: ಈತನ ರಾಮಭಕ್ತಿಯ ಕಂಡು ಆಂಜನೇಯನೆ ಮಾರುಹೋಗಿದ್ದ!
ದುಃಖದ ಮೂಲ ಆಸೆ ಮತ್ತು ಬಾಂಧವ್ಯ
ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ದುಃಖದ ಮೂಲವನ್ನು ವಿವರಿಸುತ್ತಾನೆ, ಮೊದಲು ನಮಗೆ ಒಂದು ವಿಷಯದ ಮೇಲೆ ಆಸೆ ಹುಟ್ಟುತ್ತದೆ ನಾವು ಏನನ್ನಾದರೂ ನೋಡಿದಾಗ ಮನಸ್ಸು ಅದರತ್ತ ಆಕರ್ಷಿತವಾಗುತ್ತದೆ. ಆ ಆಸೆ ಹೆಚ್ಚಾದಾಗ ಅದು ಬಾಂಧವ್ಯ ಆಗಿ ಬದಲಾಗುತ್ತದೆ. ನಮ್ಮ ಮನಸ್ಸು ನನಗೆ ಇದು ಬೇಕೇ ಬೇಕು ಇಲ್ಲದೆ ನಾನು ಖುಷಿಯಾಗಿರಲು ಸಾಧ್ಯವಿಲ್ಲ. ಎಂದು ಭಾವಿಸುತ್ತದೆ ಆದರೆ ಈ ಬಾಂಧವ್ಯದ ಜೊತೆ ಯಾವಾಗಲೂ ನಿರೀಕ್ಷೆಗಳು ಸೇರಿಕೊಂಡಿರುತ್ತದೆ.
ನಾವು ಒಂದು ನಿರ್ದಿಷ್ಟ ಫಲಿತಾಂಶಕ್ಕಾಗಿ ಕಾಯುತ್ತೇವೆ. ನಾವು ಅಂದುಕೊಂಡಂತೆ ಆಗದಿದ್ದರೆ ಅದು ನಮಗೆ ನಿರಾಸೆ ನೋವು ಮತ್ತು ಕೋಪವನ್ನು ಉಂಟುಮಾಡುತ್ತದೆ. ಅದಕ್ಕಾಗಿ ಕೃಷ್ಣನು ಹೇಳುತ್ತಾನೆ ನಮ್ಮ ಅತಿಯಾದ ಆಸೆ ಮತ್ತು ಅಂಟಿಕೊಳ್ಳುವಿಕೆಗಳು ನಮ್ಮನ್ನು ಬಂಧಿಸುತ್ತದೆ ನಿಜವಾದ ಸ್ವಾತಂತ್ರ್ಯ ಎಂಬುದು ನಮ್ಮ ಆಸೆಗಳನ್ನು ಬಿಟ್ಟುಕೊಡುವುದರಿಂದಲೂ ಬದಲಾಗಿ ಅವು ಶಾಶ್ವತವಲ್ಲ ಎಂದು ಅರ್ಥ ಮಾಡಿಕೊಳ್ಳುವುದರಿಂದ ಬರುತ್ತದೆ.
ಇದನ್ನೂ ಓದಿ: ಕೃಷ್ಣ ಜನ್ಮಾಷ್ಟಮಿ ವಿಶೇಷ: ಸ್ತ್ರೀಲೋಲ ಎಂದು ಕರೆಸಿಕೊಂಡ ಲೋಕೋದ್ಧಾರಕ
ಬಾಂಧವ್ಯ ಮತ್ತು ಪ್ರೀತಿ ಸೂಕ್ಷ್ಮ ವ್ಯತ್ಯಾಸ
ಭಗವದ್ಗೀತೆಯ ಪ್ರಮುಖ ಸಂದೇಶಗಳಲ್ಲಿ ಒಂದು “ನಿಷ್ಕಾಮ ಕರ್ಮ” ಅಂದರೆ ಫಲಿತಾಂಶದ ಬಗ್ಗೆ ಚಿಂತಿಸದೆ ನಮ್ಮ ಕರ್ತವ್ಯವನ್ನು ಮಾಡುವುದು ಕೃಷ್ಣನು ಅರ್ಜುನನಿಗೆ ಹೇಳುತ್ತಾನೆ. ನಿನ್ನ ಕೆಲಸವನ್ನು ಉತ್ಸಾಹದಿಂದ ಮಾಡು ಆದರೆ ಫಲಿತಾಂಶದ ಬಗ್ಗೆ ಅಂಟಿಕೊಳ್ಳಬೇಡ.
ಇದರ ಅರ್ಥ ಸೋಮಾರಿ ಆಗುವುದು ಎಂದಲ್ಲ ನಾವು ನಮ್ಮ ಅತ್ಯುತ್ತಮ ಪ್ರಯತ್ನವನ್ನು ಹಾಕಿ ಬರುವ ಫಲಿತಾಂಶವನ್ನು ಶಾಂತವಾಗಿ ಒಪ್ಪಿಕೊಳ್ಳಬೇಕು. ನಮ್ಮ ಕೆಲಸಕ್ಕೆ ನಿರೀಕ್ಷೆಗಳು ಸೇರಿದಾಗ ನಾವು ಯಶಸ್ಸು ಮತ್ತು ವೈಫಲ್ಯದ ಕೈ ಗೊಂಬೆಗಳಾಗುತ್ತವೆ ಯಶಸ್ಸು ಅಹಂಕಾರವನ್ನು ಹೆಚ್ಚಿಸಿದರೆ ವೈಫಲ್ಯ ಖಿನ್ನತೆಯನ್ನು ತರುತ್ತದೆ.
ಆದರೆ ನಿಷ್ಕಾಮ ಕರ್ಮವನ್ನ ಅಭ್ಯಾಸ ಮಾಡಿದಾಗ ನಮ್ಮ ಗಮನವು ನನಗೆ ಏನಾಗುತ್ತದೆ ಎನ್ನುವುದಕ್ಕಿಂತ ನನ್ನ ಅತ್ಯುತ್ತಮ ಪ್ರಯತ್ನವನ್ನ ಹೇಗೆ ಹಾಕಬಹುದು ಎನ್ನುವುದರ ಮೇಲೆ ಇರುತ್ತದೆ. ಈ ಮನೋಭಾವ ನಮ್ಮ ಮನಸ್ಸನ್ನು ಶುದ್ಧಗೊಳಿಸಿ ನಾವು ಯಶಸ್ಸು, ವೈಫಲ್ಯ ಎರಡರಲ್ಲೂ ಶಾಂತವಾಗಿರಲು ಸಹಾಯ ಮಾಡುತ್ತದೆ.
ವೈರಾಗ್ಯದ ಮೂಲಕ ನಿಜವಾದ ಸ್ವಾತಂತ್ರ್ಯ
ಭಗವದ್ಗೀತೆಯ ಪ್ರಕಾರ ನಿಜವಾದ ಶಾಂತಿಯು ಹೊರಗಿನ ಪ್ರಪಂಚವನ್ನು ನಿಯಂತ್ರಿಸುವುದರಿಂದ ಬರುವುದಿಲ್ಲ ಬದಲಾಗಿ ನಮ್ಮ ಒಳಗಿನ ಭಾವನೆಗಳನ್ನು ನಿಯಂತ್ರಿಸುವುದರಿಂದ ಬರುತ್ತದೆ. ಈ ನಿಯಂತ್ರಣವನ್ನು ವೈರಾಗ್ಯದ ಮೂಲಕ ಪಡೆಯಬಹುದು ವೈರಾಗ್ಯ ಎಂದರೆ ನಮ್ಮ ಕರ್ತವ್ಯಗಳಿಂದ ದೂರ ಉಳಿಯುವುದು ಅಥವಾ ಸಂಬಂಧಗಳನ್ನು ಬಿಡುವುದು ಎಂದಲ್ಲ ಅದು ಜಗತ್ತಿನಲ್ಲಿ ಬದುಕುತ್ತಾ ನಮ್ಮ ಸಂತೋಷವನ್ನು ಅದರ ಮೇಲೆ ಅವಲಂಬಿಸದೇ ಇರುವುದು.
ನಾವು ಬಾಂಧವ್ಯದಲ್ಲಿರುವಾಗ ಒಂದು ಸಣ್ಣ ಹೊಗಳಿಕೆ ನಮ್ಮನ್ನು ಸಂತೋಷಪಡಿಸುತ್ತದೆ ಒಂದು ಟೀಕೆ ನಮ್ಮನ್ನ ಕುಗ್ಗಿಸುತ್ತದೆ ಆದರೆ ವೈರಾಗ್ಯವನ್ನು ಅಭ್ಯಾಸ ಮಾಡಿದಾಗ ನಾವು ಎರಡರಲ್ಲೂ ಸ್ಥಿರವಾಗಿರುತ್ತೇವೆ ಕೃಷ್ಣನು ಈ ಸ್ಥಿತಿಯನ್ನು ಅಚಲವಾದ ಬುದ್ಧಿವಂತಿಕೆ ಎಂದು ಕರೆಯುತ್ತಾರೆ. ಈ ಹಂತದಲ್ಲಿ ಸಂತೋಷವೂ ಹೊರಗಿನಿಂದ ಬರುವುದಿಲ್ಲ ಅದು ನಮ್ಮ ಒಳಗಿನಿಂದಲೇ ಹುಟ್ಟುತ್ತದೆ ಈ ಸ್ವಾತಂತ್ರ್ಯವು ನಮ್ಮನ್ನು ಭಯ ಆತಂಕ ಮತ್ತು ಅವಲಂಬನೆಯಿಂದ ಮುಕ್ತಗೊಳಿಸುತ್ತದೆ.
ಹೀಗೆ ಗೀತೆಯೂ ನಮಗೆ ಕಲಿಸುವುದು ಏನೆಂದರೆ ನಮ್ಮ ನೋವಿಗೆ ಕಾರಣ ಪ್ರಪಂಚವಲ್ಲ ಬದಲಾಗಿ ಪ್ರಪಂಚದ ಮೇಲಿನ ನಮ್ಮ ಬಾಂಧವ್ಯ ನಿಷ್ಕಾಮ ಮತ್ತು ವೈರಾಗ್ಯವನ್ನ ಅಭ್ಯಾಸ ಮಾಡುವ ಮೂಲಕ ನಾವು ನಿರಾಸೆ ಮತ್ತು ದುಃಖದಿಂದ ಹೊರ ಬರಬಹುದು. ಈ ಮಾರ್ಗವನ್ನು ಅನುಸರಿಸಿದಾಗ ನಮ್ಮ ಜೀವನವು ಸ್ಪಷ್ಟತೆ ಧೈರ್ಯ ಮತ್ತು ಆಧ್ಯಾತ್ಮಿಕ ನೆರವೇರಿಕೆಯ ಹಾನಿಯಾಗುತ್ತದೆ.
